ವಿಪರ್ಯಾಸ


ದ್ರೌಪದಿ ಆಗಬೇಕು ನನಗೆ.
ಪ್ರಶ್ನೆಗಳನ್ನು ಕೇಳಬೇಕು. 
ಖಂಡಿಸ ಬೇಕು. 
ವ್ಯಂಗ್ಯವಾಡಬೇಕು.
ಚುಚ್ಚಬೇಕು.
ಆಗ್ರಹಿಸಬೇಕು 
ನ್ಯಾಯಕ್ಕಾಗಿ 
ಹೋರಾಡಬೇಕು.
ಅವಮಾನಗಳನ್ನು, 
ಅಸಹನೆಗಳನ್ನು,
ಧಾರಾಳವಾಗಿ 
ಹೊರಹಾಕಬೇಕು.

ಜೊತೆಗೇ

ಸೀತೆಯಂತೆ ಬದುಕಬೇಕು.
ಬರುವುದನ್ನು 
ಬಂದಹಾಗೇ ಸ್ವೀಕರಿಸಿ.
ಚಕಾರೆತ್ತದೆ.
ಸ್ವಲ್ಪ-ಸ್ವಲ್ಪವೇ ಸ್ಪಂದಿಸಿ,
ಅಂತರ ಕಾಯಿದುಕೊಂಡು
ಮಾನ-ಅಪಮಾನಗಳನ್ನು
ಅವನ ಕೈಗಿತ್ತು.
ದಿವ್ಯಳಾಗಿ 
ತಪಸ್ವಿನಿಯಂತೆ
ಬದುಕಬೇಕು.

-'ನಿಸ್ವಾರ್ಥಿ'ಯಾಗಿ 
ಬಾಳಬೇಕು 
'ನಾನು'!


3/8/2015

No comments:

Post a Comment